•  

ಈ ವರ್ಷದ 50ನೇ ಚಿತ್ರ ಎಂಬ ಅಗ್ಗಳಿಕೆ ಮಚ್ಚ ಪಾತ್ರ!

Machcha movie still
ಕೇವಲ ನಾಲ್ಕು ತಿಂಗಳಲ್ಲಿ 50 ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ. ಕನ್ನಡ ಚಿತ್ರೋದ್ಯಮದಲ್ಲಿ ಇದೊಂದು ಹೊಸ ದಾಖಲೆ ಎನ್ನಬಹುದು.ಈ ವರ್ಷ ಬಿಡುಗಡೆಯಾಗಿರುವ 50ನೇ ಕನ್ನಡ ಚಿತ್ರ ಎಂಬ ಅಗ್ಗಳಿಕೆಗೆ 'ಮಚ್ಚ' ಪಾತ್ರವಾಗಿದೆ. ಕಳೆದ ವರ್ಷ 118 ಕನ್ನಡ ಚಿತ್ರಗಳು ಬಿಡುಗಡೆಯಾಗಿ ದಾಖಲೆ ಸೃಷ್ಟಿಸಿದ್ದವು. ಆ ದಾಖಲೆಯನ್ನು ಅಳಿಸುವ ಭರವಸೆಯನ್ನು 2009ನೇ ವರ್ಷ ಮೂಡಿಸುತ್ತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷಬಿಡುಗಡೆಯಾಗಲಿರುವ ಚಿತ್ರಗಳ ಸಂಖ್ಯೆ ಮತ್ತಷ್ಟು ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ. ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಗಳ ಸಂಖ್ಯೆಯೇನೋ ದೊಡ್ಡದಾಗಿದೆ. ಆದರೆ ಗುಣಮಟ್ಟದ ವಿಚಾರಕ್ಕೆ ಬಂದರೆ ಹೇಳಿಕೊಳ್ಳುವಂತಿಲ್ಲ.

ವಿಚಿತ್ರವೆಂದರೆ ದೊಡ್ಡ ಸ್ಟಾರ್ ಚಿತ್ರಗಳಿಗೆ ಹೋಲಿಸಿದರೆ ಹೊಸಬರ ಚಿತ್ರಗಳೇ ಹೆಚ್ಚಾಗಿ ಬಿಡುಗಡೆಯಾಗುತ್ತಿವೆ. ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಮುಗಿಯುವವರೆಗೂ ದೊಡ್ಡ ಸ್ಟಾರ್ ಗಳ ಚಿತ್ರಗಳು ಬಿಡುಗಡೆಯಾಗಲು ಅಂಜುತ್ತಿವೆ. ಇದೇ ಒಳ್ಳೇ ಅವಕಾಶ ಎಂದು ತಿಳಿದ ಹೊಸಬರ ಚಿತ್ರಗಳು ಚಿತ್ರಮಂದಿರಗಳಿಗೆ ದಾಂಗುಡಿ ಇಡುತ್ತಿವೆ. ಆದರೆ ಬಂದಷ್ಟೇ ವೇಗವಾಗಿ ಚಿತ್ರಮಂದಿರಗಳಿಂದ ಕಾಣೆಯಾಗುತ್ತಿರುವುದು ದುರಂತ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮಚ್ಚ ರಾಜ್ಯಾದ್ಯಂತ ಈ ವಾರ ತೆರೆಗೆ
ಎರಡನೇ ಮದುವೆಗೆ ಸಜ್ಜಾದ ನಟಿ ಶ್ರುತಿ
ಸೆನ್ಸಾರ್ ಮಂಡಳಿಗೆ ಚಳ್ಳೆಹಣ್ಣು ತಿನ್ನಿಸಿದ ಹೊಡಿಮಗ
ಮೇ 8, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
 
1st Test , Lord's Cricket Ground, St John's Wood
Match starts at 03:30 pm IST  
IPL, Himachal Pradesh Cricket Association Stadium, Dharmasala
Match starts at 04:00 pm IST  
IPL, Feroz Shah Kotla, Delhi
Match starts at 08:00 pm IST  

ಈ ವರ್ಷದ 50ನೇ ಚಿತ್ರ ಎಂಬ ಅಗ್ಗಳಿಕೆ ಮಚ್ಚ ಪಾತ್ರ!

ಕೇವಲ ನಾಲ್ಕು ತಿಂಗಳಲ್ಲಿ 50 ಕನ್ನಡ ಚಿತ್ರಗಳು ಬಿಡುಗಡೆಯಾಗಿವೆ. ಕನ್ನಡ ಚಿತ್ರೋದ್ಯಮದಲ್ಲಿ ಇದೊಂದು ಹೊಸ ದಾಖಲೆ ಎನ್ನಬಹುದು.ಈ ವರ್ಷ ಬಿಡುಗಡೆಯಾಗಿರುವ 50ನೇ ಕನ್ನಡ ಚಿತ್ರ ಎಂಬ ಅಗ್ಗಳಿಕೆಗೆ 'ಮಚ್ಚ' ಪಾತ್ರವಾಗಿದೆ. ಕಳೆದ ವರ್ಷ 118 ಕನ್ನಡ ಚಿತ್ರಗಳು ಬಿಡುಗಡೆಯಾಗಿ ದಾಖಲೆ ಸೃಷ್ಟಿಸಿದ್ದವು. ಆ ದಾಖಲೆಯನ್ನು ಅಳಿಸುವ ಭರವಸೆಯನ್ನು 2009ನೇ ವರ್ಷ ಮೂಡಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷಬಿಡುಗಡೆಯಾಗಲಿರುವ ಚಿತ್ರಗಳ ಸಂಖ್ಯೆ.....
User Comments
ಕರ್ಮಕಾಂಡ 11 May 2009 09:42 am
ಇಂತ ದರಿದ್ರ ಸ್ಟೋರಿ ಇರೋ ಸಿನಿಮಾ ಬಂದ್ರೆ ಯಾರ್ತಾನೆ ನೋಡ್ತಾರೆ ಆಮೇಲೆ ಸುಮ್ನೆ ಬಡ್ಕೊಳೋದು ನಮ್ ಕನ್ನಡ ಸಿನಿಮಾ ಓಡಲ್ಲ ಅಂತ
ಶಂಕರ್ 08 May 2009 05:00 pm
ಕೈಲಾಗದವರು ,ಏನಾದರೂ ಸಾಧಿಸಲುಒಳ್ಳೆ ಅವಕಾಶ ಇದೆ ,೫೦ ಚಿತ್ರ ದಲ್ಲಿ ಒಂದೇ ಒಂದು ಜನರ ಮನ ಗೆದ್ದಿಲ್ಲ ,ಆದೆ ಹಳೆ ಮಸಾಲ ಕತೆ ,ಅದೇ ಡಾನ್ಸ್ ,ಅದೇ ಫೈಟ್ ,ಸ್ವಲ್ಪನಾದ್ರು ಹೊಸತನ ಬೇಡ್ವ?ಇದರ ಮೇಲೆ ನಮ್ಮನ್ನ ಬೆಳಯಲು ಬಿಡಲ್ಲ ,ತುಳಿತಾರೆ,ಪ್ರತಿಬೆಗೆ ಅವಕಾಶ ಇಲ್ಲ ಅನ್ನೋ ಮಾತು ಬೇರೆ .ಹೇಡಿಗಳು ,ನಿರ್ಮಾಪಕರನ್ನು ನುಣ್ಣಗೆ ಮಾಡಿದ್ದಸ್ತೆ ಇವರ ಸಾದನೆ .
[ ಅಭಿಪ್ರಾಯ ಬರೆಯಿರಿ ]
Oneindia  Oneindia Login
Follow Oneindia Kannada on Twitter
Oneindia Kannada Facebook fan page
Write Comments on this Article