Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಮ್ಯಾ, ರೂಪಾ ಅಯ್ಯರ್ ಮಧ್ಯೆ ಆಗಿಲ್ಲ ಜಟಾಪಟಿ
ತನ್ನ ಪಾತ್ರ ಮುಖ್ಯವಾಗಿರಬೇಕು, ತನಗೆ ಅಭಿನಯಸಿಲು ಹೆಚ್ಚು ಅವಕಾಶವಿರಬೇಕು. ನಾಯಕರು ಅಥವಾ ನಿರ್ದೇಶಕರು ಮುಖ್ಯವಲ್ಲ ಎಂಬುದು ರಮ್ಯಾ ನಿಲುವು. ಅದೇ ನಿಲುವನ್ನು ಅನುಸರಿಸಿಯೇ ರಮ್ಯಾ ನಂ ಒನ್ ನಟಿಯಾಗಿ ಬೆಳೆದಿದ್ದಾರೆ ಕೂಡ. ಆದರೆ ರಮ್ಯಾ, ನೈಜ ಕಥೆಯಾಧಾರಿತ ಚಿತ್ರಕ್ಕೆ ಬದಲಾವಣೆ ಬಯಸುವುದು ಎಷ್ಟರಮಟ್ಟಿಗೆ ಸರಿ? ಉತ್ತಮ ಸಿನಿಮಾವೊಂದನ್ನು ರಮ್ಯಾ ಮಿಸ್ ಮಾಡಿಕೊಂಡರೇ ಎಂಬುದು ರಮ್ಯಾ ಅಭಿಮಾನಿಗಳ ಅಳಲು.
ಆದರೆ ರಮ್ಯಾ ಮನಸ್ಸಿನಲ್ಲಿ ಏನಿದೆಯೋ. ಅವರು ಎಷ್ಟು ಬೆಳೆಯಬೇಕು, ಅವರೆಷ್ಟು ದಿನ ಉಳಿಯಬೇಕು ಎಂಬುದನ್ನು ನಿರ್ಧರಿಸಬೇಕಾದವರೂ ಅವರೇ. ಚಂದ್ರ ಚಿತ್ರದಲ್ಲಿ ಅವರ ಪಾತ್ರ ಹೇಗಿದೆ, ಏನು ಕಥೆ ಎಂಬುದು ರಮ್ಯಾಗೆ ಮಾತ್ರ ಗೊತ್ತಿದೆ. ಆದರೆ ಒಳ್ಳೆಯ ಪಾತ್ರ ಕಳೆದುಕೊಳ್ಳುವುದು ಸರಿಯಲ್ಲ, ಹಠಮಾರಿಯಾಗಿ ಇತ್ತೀಚೆಗಷ್ಟೇ ತಮಿಳಿನಲ್ಲೂ ಎರಡು ಚಿತ್ರಗಳನ್ನು ಕಳೆದುಕೊಂಡಿದ್ದಾರೆ ಎಂಬುದು ರಮ್ಯಾ ಮೇಲೆ ಅಭಿಮಾನಿಗಳ ಆರೋಪ.
ಒಟ್ಟಿನಲ್ಲಿ ನೈಜಕಥೆಯ ರಾಣಿ ಪಾತ್ರವನ್ನು ಕಳೆದುಕೊಂಡಿದ್ದಾರೆ ಸುರಸುಂದರಾಗಿ, ಸ್ಯಾಂಡಲ್ ವುಡ್ ರಾಣಿ ರಮ್ಯಾ. ರಮ್ಯಾರನ್ನು ಚಂದ್ರನ ಪ್ರೇಯಸಿಯಾಗಿ ಲವ್ಲಿ ಸ್ಟಾರ್ ಪ್ರೇಮ್ ಜೊತೆ ನೋಡುವ ಭಾಗ್ಯವನ್ನು ಕನ್ನಡ ಪ್ರೇಕ್ಷಕರು ಕಳೆದುಕೊಂಡಿದ್ದಾರೆ. ಮುಂದೇನಾಗುತ್ತೋ ಯಾರಿಗೆ ಗೊತ್ತು? (ಒನ್ ಇಂಡಿಯಾ ಕನ್ನಡ)