Don't Miss!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- News Raichur: ರಾಯಚೂರಿನಲ್ಲಿ ತಣ್ಣಗಾಗದ ಬಂಡಾಯದ ಬೆಂಕಿ: ಬಿವಿ ನಾಯಕ್, ತಿಪ್ಪರಾಜು ಜೊತೆ ಬಿಜೆಪಿ ಸಂಧಾನ ವಿಫಲ!
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಷ್ಟ್ರಧ್ವಜಕ್ಕೆ ಅಪಮಾನ, ಮಲ್ಲಿಕಾಗೆ ನೋಟಿಸ್
ಮಾದಕ ನಟಿ ಮಲ್ಲಿಕಾ ಶೆರವಾತ್ ಮತ್ತೆ ಸುದ್ದಿಯಲ್ಲಿದ್ದಾರೆ. 'ಡರ್ಟಿ ಪಾಲಿಟಿಕ್ಸ್' ಚಿತ್ರದ ಪ್ರಚಾರಕ್ಕಾಗಿ ಭಾರತದ ರಾಷ್ಟ್ರಧ್ವಜವನ್ನು ಬಳಸಿಕೊಂಡ ಕಾರಣಕ್ಕೆ ಈಗ ಮಲ್ಲಿಕಾ ಕೋರ್ಟ್ ಮೆಟ್ಟಿಲೇರಬೇಕಿದೆ.
ಹೈದರಾಬಾದಿನ ಹೈಕೋರ್ಟ್ ಸೋಮವಾರ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಹಾಗೂ ಡರ್ಟಿ ಪಾಲಿಟಿಕ್ಸ್ ಚಿತ್ರ ತಂಡಕ್ಕೆ ನೋಟಿಸ್ ಜಾರಿ ಮಾಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ ಚಿತ್ರದ ನಿರ್ಮಾಪಕ ಕೆಸಿ ಬೊಕಾಡಿಯಾ ಅವರಿಗೂ ನೋಟಿಸ್ ನೀಡಿದೆ.
ಡರ್ಟಿ
ಪಾಲಿಟಿಕ್ಸ್
ಚಿತ್ರದ
ಪೋಸ್ಟರ್
ನಲ್ಲಿ
ತ್ರಿವರ್ಣ
ಧ್ವಜವನ್ನು
ಬಟ್ಟೆಯಂತೆ
ಮೈಮೇಲೆ
ಸುತ್ತಿಕೊಂಡು
ಪೋಸ್
ನೀಡಿರುವ
ಮಲ್ಲಿಕಾಳನ್ನು
ಕಂಡು
ಕೆರಳಿದ
ಸಾಮಾಜಿಕ
ಕಾರ್ಯಕರ್ತ
ಟಿ
ಧನಗೋಪಾಲ್
ರಾವ್
ಅವರು
ಸಾರ್ವಜನಿಕ
ಹಿತಾಸಕ್ತಿ
ಅರ್ಜಿ
ಹಾಕಿದ್ದರು.
ಅಂತಾರಾಷ್ಟ್ರೀಯ
ಮಟ್ಟದಲ್ಲಿ
ತ್ರಿವರ್ಣಧ್ವಜಕ್ಕೆ
ಅಪಮಾನ
ಮಾಡಿ
ಅಗ್ಗದ
ಪ್ರಚಾರ
ಗಿಟ್ಟಿಸಿಕೊಳ್ಳುತ್ತಿದ್ದಾರೆ
ಎಂದು
ವಾದಿಸಿದ್ದರು.
ಸರ್ಕಾರಿ ವಕೀಲ ನಾರಾಯಣ ರೆಡ್ಡಿ ಅವರು ಇದಕ್ಕೆ ಪೂರಕವಾಗಿ ವಾದ ಮಂಡಿಸಿದ ಕಾರಣ, ಚಿತ್ರ ನಿರ್ಮಾಪಕ, ಪೋಸ್ಟರ್ ನಲ್ಲಿರುವ ನಟಿ ವಿರುದ್ಧ ನೋಟಿಸ್ ಜಾರಿಗೊಳಿಸಲಾಗಿದೆ. ಈ ಬಗ್ಗೆ ಸೂಕ್ತ ಮಾಹಿತಿ ನೀಡಿ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಗೃಹ ಇಲಾಖೆ ಪ್ರತಿನಿಧಿಗಳಿಗೆ ಕೋರ್ಟ್ ನಿರ್ದೇಶಿಸಿದೆ.[ಶೆರಾವತ್ 'ಡರ್ಟಿ' ಪೋಸ್ಟರ್]
ರಾಷ್ಟ್ರಧ್ವಜವನ್ನು
ವಾಣಿಜ್ಯ
ಉದ್ದೇಶಕ್ಕೆ
ಬಳಸುವುದು
ದೇಶದ
ಘನತೆ
ದಕ್ಕೆ
ತರುವ
ವಿಚಾರ.
ಈಗಾಗಲೆ
ಈ
ಪೋಸ್ಟರ್
ಗಳು
ಸಾಮಾಜಿಕ
ಜಾಲ
ತಾಣಗಳ
ಮೂಲಕ
ದೇಶ
ವಿದೇಶಗಳಲ್ಲಿ
ಪ್ರದರ್ಶನ
ಕಂಡಿವೆ.
ಇದರಿಂದ
ಭಾರತಕ್ಕೆ
ಅಪಮಾನ
ಮಾಡಿದ್ದಾರೆ
ಎಂದು
ರಾವ್
ವಾದಿಸಿದ್ದಾರೆ.
ರಾವ್
ಅವರ
ವಾದ
ಮನ್ನಿಸಿದ
ಮುಖ್ಯ
ನ್ಯಾಯಾಧೀಶ
ಕಲ್ಯಾಣ್
ಜ್ಯೋತಿ
ಸೇನ್
ಗುಪ್ತ
ಹಾಗೂ
ಜಸ್ಟೀಸ್
ಪಿವಿ
ಸಂಜಯ್
ಕುಮಾರ್
ಅವರು
ಮೇಲ್ಕಂಡ
ಆದೇಶ
ನೀಡಿ
ಮೂರು
ವಾರದೊಳಗೆ
ಉತ್ತರಿಸುವಂತೆ
ನಿರ್ದೇಶಿಸಿದ್ದಾರೆ.
ಈ
ಬಗ್ಗೆ
ಏನು
ಅರಿವಿಲ್ಲದ
ನಟಿ
ಮಲ್ಲಿಕಾ
ಅವರು
ವಿದೇಶಿ
ಪ್ರವಾಸದಲ್ಲಿ
ನಿರತರಾಗಿದ್ದಾರೆ.
ನಿರ್ಮಾಪಕ
ನಮಗೆ
ಯಾವುದೇ
ನೋಟಿಸ್
ಬಂದಿಲ್ಲ.
ಪೋಸ್ಟರ್
ನಲ್ಲಿ
ಅಶ್ಲೀಲತೆ,
ದೇಶಕ್ಕೆ
ಅಪಮಾನವಾಗುವ
ಸಂಗತಿ
ಇಲ್ಲ
ಎಂದಿದ್ದಾರೆ.
ಈ
ಚಿತ್ರದ
ಪಾತ್ರವರ್ಗದಲ್ಲಿ
ಓಂ
ಪುರಿ,
ರಾಜ್
ಪಾಲ್
ಯಾದವ್
ಮುಂತಾದವರಿದ್ದಾರೆ.
ಪ್ರಸ್ತುತ
ರಾಜಕೀಯ
ಸನ್ನಿವೇಶಗಳ
ಸುತ್ತ
ಕಥೆ
ಸುತ್ತುತ್ತದೆ
ಎನ್ನಲಾಗಿದೆ.
ಮಲ್ಲಿಕಾ
ಶೆರಾವತ್
ಅವರು
ಅನೂಕಿ
ದೇವಿ
ಪಾತ್ರವನ್ನು
ಚಿತ್ರದಲ್ಲಿ
ಪೋಷಿಸಿದ್ದಾರೆ.