•  

ಪವಿತ್ರ ತುಳಸಿ ವೈದ್ಯ ತುಳಸಿ ಎಲ್ಲರಿಗೂ ತಿಳಿಸಿ

ಬುಧವಾರ, ಆಗಸ್ಟ್ 12, 2009, 16:28 [IST]
Eat Tulsi to combat against swine flu
ಲಕ್ನೋ, ಆ. 12 : ಪವಿತ್ರ ತುಳಸಿ ಮತ್ತು ಚಿಕಿತ್ಸಕ ಗುಣಗಳ ಗಣಿ ತುಳಸಿ. ಹಲವುದಳ ಶ್ರೀತುಳಸಿ ಸೇವನೆ ಹಂದಿಜ್ವರ ನಿವಾರಣೆಗೆ ರಾಮಬಾಣ ಎನ್ನುತ್ತದೆ ಆಯುರ್ವೇದ. ಎಚ್1ಎನ್1 ರೋಗಾಣುಗಳು ತಾಗದಂತೆ ತುಳಸಿ ನಮ್ಮನ್ನು ರಕ್ಷಿಸುವುದಷ್ಟೆ ಅಲ್ಲ, ರೋಗವನ್ನು ಶೀಘ್ರವಾಗಿ ಹೋಗಲಾಡಿಸಿ ಗುಣ ಮುಖಮಾಡುತ್ತದೆ ಎಂದು ಆಯುರ್ವೇದ ವೈದ್ಯರು ಹೇಳುತ್ತಾರೆ.

ಫ್ಲು ಬಾಧೆಯನ್ನು ಹತ್ತಿಕ್ಕುವ ಗುಣ ತುಳಸಿಯಲ್ಲಿದೆ ಎಂದು ವೈದ್ಯಕೀಯ ತಜ್ಞರು ಇತ್ತೀಚೆಗೆ ಕಂಡುಕೊಂಡಿದ್ದಾರೆ. ಪ್ರಪಂಚದ ನಾನಾ ಕಡೆ ಆಯುರ್ವೇದ ಅಭ್ಯಾಸ ಮಾಡುವ ವೈದ್ಯರು ಇದೇ ಅಭಿಪ್ರಾಯ ತಳೆದಿದ್ದಾರೆ. ತುಳಸಿ ದೇಹದಲ್ಲಿನ ರೋಗನಿರೋಧಕ ಗುಣವನ್ನು ವೃದ್ಧಿಸುವುದಲ್ಲದೆ ಮೈಮೇಲೆ ಎರಗುವ ವೈರಾಣುಗಳ ವಿರುದ್ಧ ಯಶಸ್ವಿ ಸಮರ ಸಾರುವ ಶಕ್ತಿ ಹೊಂದಿರುತ್ತದೆ. ಜಪಾನಿನಲ್ಲಿ ಹಬ್ಬಿದ್ದ ಎನ್ ಸಿಫಾಲಿಟಿಸ್ ರೋಗವನ್ನು ತಡೆಯಲು ತುಳಸಿಯನ್ನು ಬಳಸಲಾಗಿತ್ತು. ತುಳಸಿಯ ಈ ಚಿಕಿತ್ಸಕ ಗುಣವನ್ನು ಹಂದಿಜ್ವರ ನಿವಾರಣೆಗೂ ಬಳಸಬಹುದು ಎಂದು ಗಿಡಮೂಲಿಕೆಗಳ ಖ್ಯಾತ ವೈದ್ಯ ಡಾ. ಯು.ಕೆ. ತಿವಾರಿ ಹೇಳುತ್ತಾರೆ.

ತುಳಸಿ ಎಲೆಗಳು ಹಂದಿಜ್ವರ ವೈರಾಣು ರೋಗ ಬಾರದಂತೆ ರಕ್ಷಿಸಬಲ್ಲದು ಮತ್ತು ರೋಗಪೀಡೀತರು ಶೀಘ್ರ ಗುಣಮುಖರಾಗುವಂತೆ ನೆರವಾಗಬಲ್ಲುದು ಎಂದು ತಿವಾರಿ ಹೇಳಿದ್ದಾರೆ. ಹಂದಿಜ್ವರ ತಡೆಯುವುದರಲ್ಲಿ ತುಳಸಿಯ ಪಾತ್ರ ಹಿರಿಯದಾದದ್ದು ಎಂದು ಹೇಳುತ್ತಾರೆ ಇನ್ನೊಬ್ಬ ವೈದ್ಯ ಡಾ. ಭೂಪೇಶ್ ಪಟೇಲ್. ಜಾಮ್ ನಗರದಲ್ಲಿರುವ ಗುಜರಾತ್ ಆಯುರ್ವೇದ ವಿಶ್ವವಿದ್ಯಾಲದಲ್ಲಿ ಭೂಪೇಶ್ ಅವರು ಉಪನ್ಯಾಸಕಾರಿದ್ದಾರೆ.
  Read:  In English 
ತುಳಸಿಗೆ ಸ್ವೈನ್ ಫ್ಲು ಹಿಮ್ಮೆಟ್ಟಿಸುವ ಶಕ್ತಿ ಇದೆ. ಆದ್ದರಿಂದ ನೀವು ಪ್ರತಿದಿನ 20ರಿಂದ 25ರಷ್ಟು ತಾಜಾ ತುಳಸಿ ಎಲೆಗಳನ್ನು ಖಾಲಿಹೊಟ್ಟೆ ಇದ್ದಾಗ ಸೇವಿಸಬೇಕು. ರೋಗ ನಿರೋಧಕ ಶಕ್ತಿಯನ್ನು ತುಳಸಿ ವೃದ್ಧಿಸುತ್ತದೆ ಹಾಗೂ ಹಂದಿಜ್ವರ ಹತ್ತಿರ ಸುಳಿಯದಂತೆ ಕಾಪಾಡುತ್ತದೆ ಎಂದು ಭೂಪೇಶ್ ಅಭಿಪ್ರಾಯಪಟ್ಟಿದ್ದಾರೆ. ಲಕ್ನೋದಲ್ಲಿರುವ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿನಲ್ಲಿ ವೃತ್ತಿಪರರಾಗಿ ಕೆಲಸಮಾಡಿದ್ದ ಡಾ. ನರೇಂದ್ರ ಸಿಂಗ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಂದಿಜ್ವರಕ್ಕೆ ತುತ್ತಾಗಿರುವ ರೋಗಿಗಳು ತುಳಸಿಯನ್ನು ಯಾವರೀತಿ ಬಳಸಬೇಕು? ರೋಗದ ತೀವ್ರತೆ ಮತ್ತು ರೋಗಿಯ ಸ್ಥಿತಿ ತುಳಸಿ ಸೇವನೆಯ ಪ್ರಮಾಣವನ್ನು ನಿರ್ಧರಿಸುತ್ತದೆ ಎನ್ನುತ್ತಾರೆ ವೈದ್ಯರು.

ತುಳಸಿಯಲ್ಲಿ ಮೂರು ವಿಧ : ಕೃಷ್ಣ ತುಳಸಿ(Ocimum sanctum), ವನ ತುಳಸಿ(Ocimum gratissimum), ಕಟುಕಿ ತುಳಸಿ(Picrorriza kurroa). ಈ ಮೂರೂ ಬಗೆಯ ತುಳಸಿಯಲ್ಲಿ ರೋಗ ನಿರೋಧಕ ಶಕ್ತಿ ಉಂಟು. ರೋಗವನ್ನು ಹಿಮ್ಮೆಟ್ಟಿಸುವ ಶಕ್ತಿಯೂ ಉಂಟು. ತುಳಸಿ ಸೇವನೆಯಿಂದ ಯಾವುದೇ ಬಗೆಯ ಅಡ್ಡ ಪರಿಣಾಮಗಳು ಇರುವುದಿಲ್ಲ. ಇತರ ಔಷಧಗಳನ್ನು ಸೇವಿಸುವಂಥ ಸಮಯದಲ್ಲೂ ತುಳಸಿಯನ್ನು ಧಾರಾಳವಾಗಿ ತಿನ್ನಬಹುದು ಎಂದು ಮೇಲೆ ಪ್ರಸ್ತಾಪಿಸಿದ ಪ್ರತಿಯೊಬ್ಬ ವೈದ್ಯರೂ ಹೇಳಿದ್ದಾರೆ.

(ಒನ್ ಇಂಡಿಯಾ ವಾರ್ತೆ)

&13;
User Comments
ಬುದ್ಧ 16 Aug 2009 09:07 pm
4,5 ದಿನಗಳ ಒಳಗೆ ಸೂಕ್ತ ಚಿಕಿತ್ಸೆ ದೊರಕದಿದ್ದರೆ ರೋಗಿ "ಮೇಲೆ" ಹೋಗಿರುತ್ತಾನೆ. ಅಲ್ಲಿಯವರೆಗೆ ತುಳಸಿ ತಿನ್ನುತ್ತಾ ಇರು ಎಂದು ಹೇಳೋಕಾಗುತ್ತಾ ? ಬಹುಶಃ ಅಲೋಪಥಿಕ್ ನೊಂದಿಗೆ ತುಳಸಿ ಸಹಾಯಕವಾಗಬಹುದೇನೋ ಅಷ್ಟೇ. ಸುಮ್ಮಸುಮ್ಮನೆ ಅಳಲೆಕಾಯಿ ಪಂಡಿತರಾಗಿ ಒಂದು ಜೀವವನ್ನು ನಿಮ್ಮ ಲೇಖನ ಓದಿ "ಗೋವಿಂದಾ" ಅನ್ನಿಸುವುದು ಬೇಡ. ಆಯುರ್ವೇದ ಕೇವಲ ಕೆಲವು ಮೂಳೆಗೆ ಸಂಬಂಧಿತ ಕಾಯಿಲೆಗಳಿಗೆ ಸಹಾಯಕವಾಗಬಹುದೋ ಏನೋ ಅಷ್ಟೇ. ಆಯುರ್ವೆದದಿಂದಲೂ ಅಡ್ಡ ಪರಿಣಾಮಗಳಾಗಬಹುದು ಎಂದು ನನಗೊಬ್ಬ ಆಯುರ್ವೆದ ವೈದ್ಯರೇ ಹೇಳಿದ್ದಾರೆ. ಹಾಗಿರುವಾಗ ಹಾದಿ ತಪ್ಪಿಸುವ ಇಂತಹ ಲೇಖನಗಳು ತುಂಬಾ ಅಪಾಯಕಾರಿ ಎಂಬುದು ನನ್ನ ಅಭಿಪ್ರಾಯ.
ಪುಟ್ಟ 16 Aug 2009 09:06 pm
ಇಂದಿನ ಎಷ್ಟೋ ಸಮಸ್ಯೆಗಳು ಮಾನವನ,ವಿಜ್ಞಾನದಿಂದ ಶ್ರುಷ್ಟಿಯಾದದ್ದು.ನೀನೊಬ್ಬ ಅಜ್ಞಾನಿ,ಬಾಬ ರಾಮದೇವ್ ರವರ ಯೋಗ ಶಿಭಿರಗಳಿಗೆ ಒಮ್ಮೆ ಬೇಟಿ ಕೊಡಿ.ಇಲ್ಲ ದಿವ್ಯ ಯೋಗ.ಕಾಮ್ ನಲ್ಲಿ ಹುಡುಕಿ.ಅಲ್ಲೋಪತಿ ಒಂದೇ ವೈದ್ಯ ಶಾಸ್ತ್ರ,ಇದೊಂದರಿಂದಲೇ ಎಲ್ಲಾ ಖಾಯಿಲೆಗಳ ಚಿಕಿತ್ಸೆಸಾದ್ಯಎಂದು ನಿಮ್ಮಂತ ಮೂರ್ಖರು ಗಳು ಮಾತ್ರ ನಂಬಲು ಸಾಧ್ಯ.ಕಾಡಿನಲ್ಲಿರುವ ಪ್ರಾಣಿಗಳಿಗೆ,ಎಲ್ಲ ಹೊಲಸನ್ನು ತಿನ್ನುವ ಪ್ರಾಣಿಗಳಿಗೆ ಏಕೆ ಖಾಯಿಲೆಗಳು ಕಡಿಮೆ? ಉತ್ತರ ನನಗೆ ಗೊತ್ತು!!! ನನ್ನ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದೇನೆ ಎನ್ನುವ ಹೆಮ್ಮೆ ನನಗಿದೆ,ನಿಮ್ಮ ಸಾಧನೆ ಏನು ?
ಬುದ್ಧ 16 Aug 2009 09:15 pm
ಪುಟ್ಟಣ್ಣ, ನೀವು ದೊಡ್ಡ ಪಂಡಿತರೇ ಇರಬಹುದು. ಆದರೆ ಅಲೋಪಥಿಯಷ್ಟು ಆಯುರ್ವೇದ ಮನುಷ್ಯನಿಗೆ ಸಹಕಾರಿಯಲ್ಲ ಎಂಬುದು ಎಲ್ಲರಿಗೂ ತಿಳಿದ ಸತ್ಯ. ಅಲೋಪಥಿಯಲ್ಲೂ ಲೋಪ, ದೋಷಗಳಿರಬಹುದು. ಆದರೆ ತುರ್ತು ಪರಿಸ್ಥಿತಿಯಲ್ಲಿ ಎಲ್ಲರೂ ಅಲೋಪಥಿಯಾ ಮೊರೆ ಹೋಗುತ್ತಾರೆ. ಹೈ ಬಿ.ಪಿ, ಮಧುಮೇಹ ಮುಂತಾದ ರೋಗಗಳನ್ನು ಆಯುರ್ವೇದ ಗುಣ ಪಡಿಸಲಾರದು. ಅವಕ್ಕೂ ಕೆಲವು ಮೆಡಿಸಿನ್ ಇರಬಹುದು. ಆದರೆ ಅವನ್ನೇ ನಂಬಿದರೆ ರೋಗಿ "ಗೋವಿಂದಾ" ಅಷ್ಟೇ.
ಬುದ್ಧ 16 Aug 2009 09:19 pm
ಪಂಡಿತೋತ್ತಮರೆ, ನಿಮಗೊಂದು ಸವಾಲು. ಹಂದಿ ಜ್ವರಕ್ಕೊಂದು ಶಾಶ್ವತ ಪರಿಹಾರ ಹೇಳಿ ನೋಡೋಣ. ಆವಾಗ ನಿಮ್ಮ ಮಾತನ್ನು ಒಪ್ಪಿಕೊಳ್ಳೋಣ....
[ ಅಭಿಪ್ರಾಯ ಬರೆಯಿರಿ ]
IPL, Wankhede Stadium, Mumbai
Kolkata Knight Riders won by 32 runs
1st Test , Lord's Cricket Ground, St John's Wood
Match starts at 03:30 pm IST  
IPL, Himachal Pradesh Cricket Association Stadium, Dharmasala
Match starts at 04:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article