ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಗು ಮೊಗವನು ಸಡಲಿಸುವ ನಗೆ ಹನಿಗಳು!

By ದಯಾನಂದ್ ಘಂಟಾಚಾರ್ಯ, ಚಿಕ್ಕಮಗಳೂರು
|
Google Oneindia Kannada News

Humorous Kannada poems by Dayanand Ghantacharya
ಆಗ
ಕಷ್ಟಪಟ್ಟು ಕೊಂಡೆ
ಮೊಬೈಲ್ ಪ್ರೇಯಸಿಗಾಗಿ
ಈಗ
ಇಷ್ಟಪಟ್ಟು ಬಿಟ್ಟಿದ್ದೇನೆ
ಮೊಬೈಲ್ ಪ್ರೈವೆಸಿಗಾಗಿ

***
ಬರಬಾರದೆ
ಮಳೆ?
ಗಿಡ ಮರ ಕಡಿದರೆ
ಬರ ಬಾರದೆ?

***
ಕೈಬರಹ
ಬಡಿದೋಡಿಸಿ
ಇಟ್ಟುಕೊಂಡಿದ್ದೇವೆ
PEN-DRIVE

***
'ಆಸ್ಕರ್' ಸಿಕ್ಕಷ್ಟೇ ಸಂತೋಷ
ಆಕೆ ನನಗೆ ಸಿಕ್ಕಿದ್ದು
ಅನುಮಾನವಿದ್ರೆ
'ASK HER'

***
ನಗ-ಬೇಕು
ಬ್ಯಾಂಕಿಗೆ ನಗ-ಬೇಕು
ಎನ್ನುವ ಮ್ಯಾನೇಜರ್
ಮೊದಲು ನಗಬೇಕು

***
ದಲಿತ ಕವಿಗೆ
ಕವನ ಬರೆಯಲು
ಕೊಡುತ್ತಾರೆ ಪೇಪರ್
ಬಲಿತ ಕವಿಗೂ
ಕೊಡುತ್ತಾರೆ
PAY - PER ಕವನ!

***
ಸೀತೆಯ ರಕ್ಷಣೆಗಾಗಿ
ಲಕ್ಷ್ಮಣ ಗೆರೆ ಹೊಡ್ದಾ
ರಾವಣ ಬಂದು
ಲೈನ್ ಹೊಡ್ದಾ!

English summary
Humorous short Kannada poems by Dayanand Ghantacharya, Chikkamagalur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X