ರವಿ ಕೃಷ್ಣಾ ರೆಡ್ಡಿ, ಕುಪರ್ಟಿನೊ, ಕ್ಯಾಲಿಫೊರ್ನಿಯ.
ನೀರಸದ ಜೀವನಕೆ ರಸ ಬೆರೆಸ ಬಾರೆ,
ನೀರೆ, ಮಧುಬಿಂದಿಗೆಯ ತೆಳುನಡುವಲಿಡಿದು।।
ಅದ ಕಂಡೆ ಇದ ಕಂಡೆ, ತೃಪ್ತಿಯೆಂಬುದು ಇಲ್ಲ,
ಖಂಡ ಖಂಡಗಳ ಜಿಗಿದೆ, ಭಾವ ತಣಿದಿಲ್ಲ,
ಬೇಸರವೊ ದುಃಖವೊ ಈ ಪರಿಯ ತಿಳಿಯೆ!
ಎದೆಕೊರತೆಯಾ ತಿಳಿವು ದಿನ ಮನದಲೆಲ್ಲಾ।।
ರಾಗವೈರಾಗ್ಯಗಳ ಆಚೀಚೆ ನಾ ಪಯಣಿ
ರಾಗಿಣಿ ರೂಪಿಣಿ ನೀ ಸುಧೆಯಧರ ರಾಣಿ.
ಜನ್ಮಜನ್ಮಾಂತರದ ಅಂಧ ಬಂಧಗಳೇಕೆ?
ಮೃತ್ಯುಂಜಯವು ಜೀವ ನಿನ್ನೊಲವ ಸವಿಯೆ।।
ನೀರಸದ ಜೀವನಕೆ ರಸ ಬೆರೆಸ ಬಾರೆ,ನೀರೆ, ಮಧುಬಿಂದಿಗೆಯ ತೆಳುನಡುವಲಿಡಿದು।।
ಅದ ಕಂಡೆ ಇದ ಕಂಡೆ, ತೃಪ್ತಿಯೆಂಬುದು ಇಲ್ಲ,
ಖಂಡ ಖಂಡಗಳ ಜಿಗಿದೆ, ಭಾವ ತಣಿದಿಲ್ಲ,
ಬೇಸರವೊ ದುಃಖವೊ ಈ ಪರಿಯ ತಿಳಿಯೆ!
ಎದೆಕೊರತೆಯಾ ತಿಳಿವು ದಿನ ಮನದಲೆಲ್ಲಾ।।
ರಾಗವೈರಾಗ್ಯಗಳ ಆಚೀಚೆ ನಾ ಪಯಣಿ
ರಾಗಿಣಿ ರೂಪಿಣಿ ನೀ ಸುಧೆಯಧರ ರಾಣಿ.
ಜನ್ಮಜನ್ಮಾಂತರದ ಅಂಧ ಬಂಧಗಳೇಕೆ?
ಮೃತ್ಯುಂಜಯವು ಜೀವ ನಿನ್ನೊಲವ ಸವಿಯೆ।।














