ಏನೇ ಆಗ್ಲಿ ಈ ವರ್ಷ ಎಂಕಾಂ ಮಾಡ್ಲೇಬೇಕು
ಪ್ರತಿ ಯುಗಾದಿಗೆ ನಿರ್ದಿಷ್ಟ ಗುರಿ ಇಟ್ಟುಕೊಂಡು ಜೀವನ ನಡೆಸುವ ಪಕ್ಕಾ planned ಪಂಗಡಕ್ಕೆ ಸೇರಿದವನು ನಾನಲ್ಲ. ಆದರೆ ಈ ಯುಗಾದಿಗೆ ಒಂದು resolution ತೆಗೆದುಕೊಂಡು ಅದನ್ನು ಮುಂದಿನ ಯುಗಾದಿಯ ಒಳಗೆ ಆ ನಿಟ್ಟಿನಲ್ಲಿ ಒಂದು ಹೆಜ್ಜೆ ಇಡಬೇಕೆನ್ನುವುದು ನನ್ನ ಸದ್ಯದ ಈಗಿನ ಮನಸ್ಥಿತಿ.
ಜೀವನದಲ್ಲಿ ಮೊದಲಬಾರಿಗೆ ಒಂದು ನಿರ್ದಿಷ್ಟ ಟಾರ್ಗೆಟ್ ಇಟ್ಟುಕೊಂಡವನು. ಹಾಗಾಗಿ ನನ್ನ ಪ್ರಯತ್ನದಲ್ಲಿ ತಕ್ಕ ಮಟ್ಟಿನ ಯಶಸ್ಸು ಹೊಂದುತ್ತೇನೆ ಎನ್ನುವ ಅಪಾರ ನಂಬಿಕೆಯಲ್ಲಿದ್ದೇನೆ. ನಾನು ಬಿಕಾಂ ಪಧವೀಧರ. ನನ್ನ ಈ ವರ್ಷದ resolution ಏನೆಂದರೆ ಎಂಕಾಂ ಮಾಡಬೇಕು. ಅಲ್ಲದೆ ಪತ್ರಿಕೋದ್ಯಮದಲ್ಲಿ ಕೂಡಾ ಕೋರ್ಸ್ ಮಾಡಬೇಕೆಂದು ಇದ್ದೇನೆ.
ನಲವತ್ತು ವರ್ಷವಾಯಿತು ಯಾಕಪ್ಪ ಹೈಯರ್ education ಎನ್ನುವ ಹಿತಶತ್ರುಗಳಿಗೆ ನನ್ನಲ್ಲಿ ಏನೂ ಕೊರತೆ ಇಲ್ಲ. ಆದರೆ ವಿದ್ಯೆಗೆ ವಯಸ್ಸಿನ ಕಟ್ಟುಪಾಡು ಸರಿಯಲ್ಲ ಎಂದು ಒಂದು ಹೆಜ್ಜೆ ಮುಂದೆ ಇಟ್ಟೇ ಬಿಡೋಣ ಎನ್ನುವ ಗಟ್ಟಿ ನಿರ್ಧಾರಕ್ಕೆ ಬಂದಿದ್ದೇನೆ. ಪತ್ರಿಕೋದ್ಯಮದಲ್ಲಿ ಯಾವ ಕೋರ್ಸ್ ಮಾಡಿದರೆ ಒಳ್ಳೇದು ಎಂದು, ಅಂತರ್ಜಾಲದಲ್ಲಿ ಕನ್ನಡವನ್ನು ಯಾವ ರೀತಿಯಲ್ಲಿ ಪೋಣಿಸಬೇಕು ಎಂದು ಪ್ರತಿದಿನ ನನಗೆ ತಿದ್ದಿಬುದ್ದಿ ಹೇಳುತ್ತಿರುವ ಶಾಮ ಸುಂದರ ಅವರ ಬಳಿ ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕೂಂತ ಇದ್ದೀನಿ.
ಶ್ರೀನಂದನ ಸಂವತ್ಸರದಲ್ಲಿ ನಾನು ನಂಬಿದ ಕುಲದೇವರು, ಗ್ರಾಮದೇವರು, ಶ್ರೀವಾದಿರಾಜ ಗುರುಗಳು ನನ್ನ ಇಷ್ತಾರ್ಥವನ್ನು ಸಿದ್ದಿಸುತ್ತಾರೆ ಎನ್ನುವ ನಂಬಿಕೆಯೊಂದಿಗೆ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. [ನಿಮ್ಮ ಕನಸುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ]