ಪರಿಸರ ಉಳಿಸುವುದು ಪ್ರತಿಯೊಬ್ಬನ ಕರ್ತವ್ಯ
ಗಣಪನ
ಸಂದೇಶ
:
ಪರಿಸರವೇ
ದೇವರು
ಎನ್ನುವ
ಉದ್ಭವ
ಗಣೇಶ,
ಅರಣ್ಯ
ಸಂರಕ್ಷಿಸಿ
ಎನ್ನುವ
ಗಣಪತಿ,
ಪ್ರಾಣಿ-ಪಕ್ಷಿ
ಸಂಕುಲವನ್ನು
ಕಾಪಾಡಿ
ಎಂದು
ಕೋರುವ
ವಿನಾಯಕ,
ನಿಧಿಯ
ಆಸೆಗಾಗಿ
ದೇವಸ್ಥಾನ
ಹಾಳುಮಾಡಬೇಡಿ
ಎನ್ನುವ
ಸಾಮಾಜಿಕ
ಕಳಕಳಿಯ
ವಕ್ರದಂತ,
ಕೆಮ್ಮಣ್ಮು-ಅಷ್ಟಗಂಧ-ವಿಭೂತಿ-ಕುಂಕುಮ-ಅರಿಷಿಣಗಳಿಂದಲೇ
ಲೇಪಿತನಾದ
ಲಂಬೋಧರ
ಮಂಜುನಾಥ
ಅವರ
ಕೈಯಲ್ಲಿ
ಅರಳಿ
ನಿಂತಿವೆ.
ಕಲಾವಿದರಿಗೆ
ತರಬೇತಿ
:
ತಾವೇ
ಸ್ವತಃ
ವಿಘ್ನ
ವಿನಾಯಕನನ್ನು
ತಯಾರಿಸುವುದರೊಂದಿಗೆ
ಆಸಕ್ತಿಯುಳ್ಳವರಿಗೆ
ಗಣೇಶನ
ಮೂರ್ತಿಗಳನ್ನು
ತಯಾರಿಸುವ
ಕಾರ್ಯದಲ್ಲೂ
ಅವರು
ತೊಡಗಿದ್ದಾರೆ.
ಮಕ್ಕಳಿಗಾಗಿ
ಬೇಸಿಗೆ
ಶಿಬಿರದಲ್ಲಿ
ಗಜಾನನನ
ಮೂರ್ತಿ
ತಯಾರಿಸುವ
ಕಲೆ
ಹೇಳಿಕೊಡುತ್ತಾರೆ.
ಇತ್ತೀಚಿನ
ದಿನಗಳಲ್ಲಿ
ತರಬೇತಿಗಾಗಿ
ಬರುತ್ತಿರುವವರು
ಕಡಿಮೆಯಾಗುತ್ತಿದ್ದಾರೆ.
ಇನ್ನೂ
ಹೆಚ್ಚೆಚ್ಚು
ಯುವಕ,
ಯುವತಿಯರು
ಗಣೇಶನ
ಮೂರ್ತಿ
ತಯಾರಿಸುವ
ಕಲೆಗಾರಿಕೆಯನ್ನು
ಕಲಿಯಬೇಕು
ಎಂದು
ಅವರು
ಕೋರಿದ್ದಾರೆ.
ಆಸಕ್ತಿಯಿದ್ದವರು ಅವರನ್ನು ಸಂಪರ್ಕಿಸಿ : ಮಂಜುನಾಥ ಮ. ಹಿರೇಮಠ, ಆಂಜನೇಯ ನಗರ, ಕೆಲಗೇರಿ, ಧಾರವಾಡ - 580 007. ಮೊಬೈಲ್ ಸಂಖ್ಯೆ : 98807 87122. ಈಮೇಲ್ ವಿಳಾಸ : [email protected]