ವಿನಾಯಕನಿಗೆ ವಿಶೇಷ ಅಲಂಕಾರ ಹೀಗಿರಲಿ
ಗಣೇಶನ ಹಬ್ಬಕ್ಕೆ ಅಲಂಕಾರ ಹೀಗಿರಲಿ:
1.
ಈಶಾನ್ಯ
ದಿಕ್ಕು:
ಮನೆಯ
ಈಶಾನ್ಯ
ದಿಕ್ಕು
ಏಳಿಗೆ
ಮತ್ತು
ಸಂತಸದ
ಸಂಕೇತ.
ಆದ್ದರಿಂದ
ಈಶಾನ್ಯದ
ಜಾಗದಲ್ಲಿ
ಗಣೇಶನನ್ನು
ಇಡಲು
ಸಿದ್ಧತೆ
ಮಾಡಿಕೊಳ್ಳಿ.
2.
ಮಂಟಪ:
ಮಂಟಪವಿದ್ದರೆ
ಅದರಲ್ಲಿ
ಕೂರಿಸಬಹುದು,
ಇಲ್ಲವೆಂದರೆ
ಸ್ಟೂಲ್
ಮೇಲೆ
ಕೆಂಪು
ಬಟ್ಟೆ
ಹೊದಿಸಿ
ಕೂಡ
ಗಣೇಶನನ್ನು
ಕೂರಿಸಬಹುದು.
3.
ಬಣ್ಣದ
ಪೇಪರ್:
ಗಣೇಶನ
ಹಿಂಭಾಗದ
ಗೋಡೆಯನ್ನು
ಬಿಳಿ
ಕರ್ಟೇನ್
ಅಥವಾ
ಬಟ್ಟೆಯಿಂದ
ಮುಚ್ಚಿ
ಅದಕ್ಕೆ
ಹಸಿರು,
ಕೆಂಪು,
ಹಳದಿ
ಬಣ್ಣದ
ಅಲಂಕೃತ
ಪೇಪರ್
ಗಳನ್ನು
ಅಲಂಕಾರಕ್ಕೆ
ಬಳಸಬಹುದು.
ಇಲ್ಲವೆಂದರೆ
ವಿವಿಧ
ರೀತಿಯ
ಹೂವುಗಳನ್ನು
ತೂಗುಹಾಕಬಹುದು.
4.
ಹಸಿರು
ತೋರಣ:
ಗಣೇಶನ
ಅಲಂಕಾರಕ್ಕೆ
ಹಸಿರು
ಪೂರಕ.
ಆದ್ದರಿಂದ
ಪೂಜಾ
ಕೋಣೆಗೆ,
ಮನೆ
ಬಾಗಿಲಿಗೆ
ಹಸಿರು
ತೋರಣ
ಹಾಕುವುದನ್ನು
ಯಾವುದೇ
ಕಾರಣಕ್ಕೂ
ಮರೆಯಬೇಡಿ.
5.
ಹೂವಿನ
ಅಲಂಕಾರ:
ಗಣೇಶನ
ಮುಂದೆ
ರಂಗವಲ್ಲಿ
ಬಿಡಿಸಿ
ಹೂವಿನ
ದಳಗಳಿಂದ
ಅಲಂಕಾರ
ಮಾಡಿ
ಮಧ್ಯೆ
ಪುಟ್ಟ
ಹಣತೆಯನ್ನು
ಇಡಬಹುದು.
6.
ದೀಪಗಳು:
ಪುಟ್ಟ
ಪುಟ್ಟ
ದೀಪಗಳನ್ನು
ಗಣೇಶನ
ಮುಂದೆ
ವಿನ್ಯಾಸವಾಗಿ
ಇಟ್ಟರೆ
ನೋಡಲು
ತುಂಬಾ
ಚೆನ್ನಾಗಿರುತ್ತದೆ.
7.
ಹಣ್ಣು
ಮತ್ತು
ಸಿಹಿ
ತಿಂಡಿ:
ಐದು
ಬಗೆಯ
ಹಣ್ಣುಗಳು,
ತಯಾರಾಗಿರುವ
ವಿವಿಧ
ತಿಂಡಿಗಳನ್ನು
ಪ್ರತ್ಯೇಕ
ತಟ್ಟೆಗಳಲ್ಲಿ
ಗಣೇಶನ
ಮುಂದೆ
ಇಡಬಹುದು.
8.
ಅಕ್ಷತೆ
ಮತ್ತು
ನೈವೇದ್ಯ:
ಗಣೇಶನ
ಎರಡೂ
ಬದಿಗಳಲ್ಲಿ
ದೊಡ್ಡ
ದೀಪಗಳನ್ನು
ಇಟ್ಟು,
ಅರಿಶಿನ
ಕುಂಕುಮ,
ಅಕ್ಷತೆ,
ಹೂವು,
ನೈವೇದ್ಯಕ್ಕೆ
ಕಡಲೆ
ಉಸುಳಿ
ಮತ್ತು
ಮೋದಕವನ್ನು
ಇಡಬೇಕು.
9.
ಐದು
ಅಥವಾ
ಒಂಭತ್ತು
ಬಗೆ
ಹೂವು
ಮತ್ತು
ಗರಿಕೆ,
ಎಕ್ಕದ
ಹೂವು:
ಗಣೇಶನ
ಅಲಂಕಾರಕ್ಕೆ
ಐದು
ಅಥವಾ
ಒಂಭತ್ತು
ಬಗೆಯ
ಹೂವನ್ನು
ಬಳಸಬಹುದು.
ಗಣೇಶನ
ಪೂಜೆಗೆ
ಅತಿ
ಅವಶ್ಯಕವಾದ
ಗರಿಕೆ,
ಜನಿವಾರ,
ಎಕ್ಕದ
ಹೂವಿನ
ಹಾರ,
ಅಕ್ಷತೆಯನ್ನು
ಮರೆಯಬೇಡಿ.
ಈ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡ ಮೇಲೆ ಗಣಪನನ್ನು ಭಕ್ತಿಯಿಂದ ನಿರ್ಮಲ ಮನಸ್ಸಿನಿಂದ ಪೂಜಿಸಿ ಒಲಿಸಿಕೊಳ್ಳಿ.