ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಳೆ ಗರಿಯಲ್ಲಿದೆ ನಿಮ್ಮ ಜೀವನದ ಗುರಿ

|
Google Oneindia Kannada News

Truth Etched on Palm Leaves
ಕೇವಲ ಗ್ರಹಗಳ ಚಲನವಲನವಷ್ಟೇ ವ್ಯಕ್ತಿಯ ಬದುಕಿನ ಏರಿಳಿತಕ್ಕೆ ಕಾರಣವಾಗುವುದಿಲ್ಲ, ಆತನ ಜನ್ಮ ಫಲವೂ ಇದಕ್ಕೆ ಕಾರಣವಾಗಿರುತ್ತದೆ. ನಾಡಿ ಜ್ಯೋತಿಷ್ಯದ ಇನ್ನೊಂದು ಸತ್ಯವೆಂದರೆ ಈ ಜ್ಯೋತಿಷ್ಯವನ್ನು ಸಂಪೂರ್ಣವಾಗಿ ವಿವರಿಸಲು ಸಾಧ್ಯವಿಲ್ಲ. ಗೋಚರಿಸದ ಶಕ್ತಿ ಮತ್ತು ದೈವಿಕ ಅಂಶ ಈ ನಾಡಿ ಜ್ಯೋತಿಷ್ಯಕ್ಕಿದೆ.

ತಾಳೆ ಗರಿಯಲ್ಲಡಗಿದೆ ಬದುಕಿನ ಉದ್ದೇಶ

ಈ ನಾಡಿ ಜ್ಯೋತಿಷ್ಯವನ್ನು ತಿಳಿದುಕೊಳ್ಳುವುದರಿಂದ ನಿಮ್ಮ ಜೀವನದ ಏಕೈಕ ಉದ್ದೇಶವನ್ನು ಅರಿಯಲು ಅನುವಾಗುತ್ತದೆ. ಅಷ್ಟೇ ಅಲ್ಲ, ವರ್ತಮಾನ ಮತ್ತು ಭೂತ ಕಾಲದಲ್ಲಿನ ಸಮಸ್ಯೆಗಳು, ಸಂಬಂಧ, ಕಾರಣ, ಫಲಿತಾಂಶ ಎಲ್ಲವನ್ನೂ ಇದರಿಂದ ತಿಳಿಯಬಹುದು. ನಿಮ್ಮನ್ನು ಸದಾ ಕಾಡುವ ಕೆಲವು ಪ್ರಶ್ನೆಗಳು, ಆದರೆ ಯಾರ ಬಳಿ ಕೇಳಬೇಕೆಂದು ತಿಳಿಯದೇ ಉಳಿದ ಪ್ರಶ್ನೆಗಳಿಗೆ ತಾಳೆಗರಿಯಲ್ಲಿ ಉತ್ತರ ಸಿಗುತ್ತದೆ.

ಈ ನಾಡಿ ವಿದ್ಯೆಯ ಸಹಾಯದಿಂದ ನೀವು ಜೀವನದಲ್ಲಿ ಹಿಂದೆ ಉಳಿಯಲು ಕಾರಣವಾದ, ನಿಮ್ಮ ಬೆಳವಣಿಗೆಗೆ ಅಡ್ಡಿಯಾಗಿ ನಿಂತಿರುವ ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ನಾಡಿ ಜ್ಯೋತಿಷ್ಯದ ಸಹಾಯದಿಂದ ಬದುಕಿನ ಪ್ರತಿ ಅಂಶಗಳನ್ನೂ ಗುರುತಿಸಿ ಜೀವನವನ್ನು ಹಸನಾಗಿಸಿಕೊಳ್ಳಬಹುದು.

ತಾಳೆ ಗರಿ ಶಾಸ್ತ್ರ ಎಲ್ಲಾ ಜ್ಯೋತಿಷ್ಯ ಶಾಸ್ತ್ರಗಳಿಗಿಂತ ವಿಭಿನ್ನ. ಈ ಜ್ಯೋತಿಷ್ಯಕ್ಕೆ ಹೆಬ್ಬೆರಳಿನ ಗುರುತು ಇದ್ದರೆ ಸಾಕು. ನಿಮ್ಮ ಹೆಬ್ಬೆರಳಿನ ಗುರುತನ್ನು ತಾಳೆಗರಿಯಲ್ಲಿನ 108 ರೀತಿಯ ಹೆಬ್ಬೆರಳಿನ ಗುರುತಿನ ಜೊತೆ ಹೋಲಿಸಿ ಭವಿಷ್ಯ ನುಡಿಯಲಾಗುತ್ತೆ. ಈ ತಾಳೆಗರಿಗಳನ್ನು ಸಾವಿರಾರು ವರ್ಷಗಳಿಂದಲೂ ರಕ್ಷಿಸಿಕೊಂಡು, ಅನುಸರಿಸಿಕೊಂಡು ಬರುತ್ತಿರುವುದರಿಂದ ನಾಡಿ ಭವಿಷ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ.

English summary
Jyotish which means science of light actually utilizes the divinely channeled sacred inscriptions that were etched on palm leaves, collectively known as Nadi Leaves. With the help of Nadi Astrology, astrologers can trace the soul's entire journey, whether it is of previous birth or the current one.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X